ಇದು ಸುನ್ನತ್ ಜಮಾಅತ್ ಅಳಿವು- ಉಳಿವಿನ ಪ್ರಶ್ನೆ. ನಿರ್ಲಕ್ಷ್ಯ ವಹಿಸಿದರೆ ಖಂಡಿತಾ ಅಲ್ಲಾಹನ ಬಳಿ ಉತ್ತರ ಹೇಳಬೇಕಾದೀತು.
ಸಾವಿರಾರು ಕರಾಮತ್ ಗಳು ಪ್ರಕಟವಾಗುವ ಸಯ್ಯಿದ್ ಮದನಿ ತಂಙಳವರ ದರ್ಬಾರಿನಲ್ಲಿ ಇಷ್ಟೆಲ್ಲಾ ಅಕ್ರಮ, ಪುಂಡಾಟಿಕೆ, ಲೂಟಿ ನಡೆಯುವಾಗ ಯಾಕೆ ಕರಾಮತ್ ಕಾಣಿಸುತ್ತಿಲ್ಲ ಎಂಬ ಆಲೋಚನೆಯಲ್ಲೇ ನಾವಿದ್ದೇವೆ ಅಲ್ಲವೇ? ಇಷ್ಟೆಲ್ಲಾ ಅವಾಂತರಗಳಿಗೆ ಕಾರಣರಾದವರು ನಾಶವಾಗಿ ಹೋದರೆ ಒಳ್ಳೆಯದಿತ್ತು ಎಂದೆಲ್ಲಾ ನಾವು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ಮೌನವಾಗಿ ಕುಳಿತಿದ್ದೇವೆ ಅಲ್ಲವೇ..??? ಆ ದಿನವನ್ನು ನೀವು ಕಾಯುತ್ತಾ ಕುಳಿತಿದ್ದೀರಾ...? ಈಗಾಗಲೇ ತಿಳಿಸಿದಂತೆ ನಾವು ಕಾರ್ಯತಂತ್ರ ಹೆಣೆದು ಕಾರ್ಯಾಚರಣೆಗೆ ಇಳಿಯದ ಹೊರತು ಇಲ್ಲಿ ಯಾವ ಕ್ರಾಂತಿಯನ್ನೂ ಸೃಷ್ಠಿಸಲು ಅಸಾಧ್ಯ. ನಾವು ಒಳಿತಿನ ನಿಯ್ಯತ್ ನೊಂದಿಗೆ ಕಾರ್ಯಾಚರಣೆಗೆ ಇಳಿದರೆ ನಮಗೆ ಖಂಡಿತಾ ಅಲ್ಲಾಹನ ಸಹಾಯ ಲಭಿಸಿಯೇ ತೀರುತ್ತದೆ.. ಮತ್ತೆ ಅಲ್ಲಾಹು ಯಾಕೆ ಅವರಿಗೆ ಶಿಕ್ಷೆ ಕೊಡುತ್ತಿಲ್ಲ ಎಂಬ ಸಂಶಯವೇ? ಅಲ್ಲಾಹು ಹೇಳುತ್ತಾನೆ ولا تحسبن الله غافلاً عما يعمل الظالمون، إنما يؤخرهم ليوم تشخص فيه الأبصار " ಅಕ್ರಮಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಅಲ್ಲಾಹನು ಅಶ್ರದ್ಧನೆಂದು ಯಾರೂ ತಿಳಿಯದಿರಿ. ಖಂಡಿತವಾಗಿಯೂ (ಶಿಕ್ಷೆ ನೀಡದೆ) ಅವರನ್ನು ಮುಂದೂಡುತ್ತಿರುವುದು, ಯಾರನ್ನೂ ವಂಚಿಸಲಾರದ ದಿನಕ್ಕೆ ಬೇಕಾಗಿಯಾಗಿದೆ( ಅಂತ್ಯ ದಿನದಂದು ಇದರ ಶಿಕ್ಷೆಯನ್ನು ಖಂಡಿತ ಅವರು ಅನುಭವಿಸುವರು ಎಂದರ್ಥ) ಮಿತ್ರರೇ.. ಇದು ಸುನ್ನತ್ ಜಮಾಅತ್ ಅಳಿವು- ಉಳಿವಿನ ಪ್ರಶ್ನೆ. ನಿರ್ಲಕ್ಷ್ಯ ವಹಿ