ಉಳ್ಳಾಲದಲ್ಲಿ ಶಾಂತಿ ನಿರ್ಮಾಣಕ್ಕೆ ಉಳ್ಳಾಲದ ಹಿರಿಯ ಧಾರ್ಮಿಕ ವಿದ್ವಾಂಸ ಪಟ್ಟಾಂಬಿ ಉಸ್ತಾದರ ಕರೆ *ಉಳ್ಳಾಲದ ಅಳೇಕಲ ಜುಮಾ ಮಸೀದಿಯಲ್ಲಿ ಕಳೆದ 35 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ, ಉಳ್ಳಾಲದ ಹಿರಿಯ ಧಾರ್ಮಿಕ ವಿದ್ವಾಂಸರಲ್ಲಿ ಒಬ್ಬರಾದ ಅವರು, ಜುಮಾ ನಮಾಝ್ ಬಳಿಕ ಮಾತನಾಡಿ, ಉಳ್ಳಾಲದಲ್ಲಿ ಈಗ ನಡೆಯುತ್ತಿರುವ ಗೊಂದಲಮಯ ವಾತಾವರಣಕ್ಕೆ ಮುಖ್ಯ ಕಾರಣ ನಮ್ಮ ಬಹುಮಾನ್ಯರಾದ ಖಾಝಿಯವರ ಮಾತು ಕೇಳದೇ, ಅವರನ್ನು ದಿಕ್ಕರಿಸಿ ಹೋಗುವುದಾಗಿದೆ.!* *ಊರಿನಲ್ಲಿ ಯಾವುದೇ ಪ್ರಶ್ನೆ ಬಂದರೂ, ಅದು ಕಿತಾಬಿನ ವಿಷಯ ಆಗಲಿ, ಪೆರ್ನಾಳ್ ಚಂದ್ರ ದರ್ಶನ ಅಥವಾ ಬೇರೆ ಏನೇ ಆಗಲಿ, ಖಾಝಿಯವರು ಏನು ಹೇಳುತ್ತಾರೆ ಅದನ್ನು ಸ್ವೀಕರಿಸುವುದು ಇಸ್ಲಾಂನ ನಿಯಮ. ಅದು ಬಿಟ್ಟು ಯಾರೋ ಕೆಲವು ಅವಿವೇಕಿಗಳು ಹೇಳುವುದನ್ನು ಕೇಳಿ, ಖಾಝಿಯವರನ್ನು ದಿಕ್ಕರಿಸಿ ಅವರ ಹಿಂದೆ ಹೋದರೆ ನಾಶ ಕಂಡಿತಾ!!* *ಅಷ್ಟೇ ಅಲ್ಲ, ನಮ್ಮ ಊರಿನ ಖಾಝಿ ಅವರು ಒಬ್ಬರು ಸಯ್ಯದ್ ಕೂಡಾ ಹೌದು. ನಮ್ಮ ಮುತ್ತು ನೆಬಿ ಮುಹಮ್ಮದ್ ಮುಸ್ತಫಾ (ಸ.ಅ) ರು ಹೇಳಿದ್ದಾರೆ, "ನನ್ನ ಕುಟುಂಬ ಅದು ನೂಹ್ ನೆಬಿ(ಅ.ಸ) ರವರ ಹಡಗು ಇದ್ದ ಹಾಗೆ, ಅದನ್ನು ಯಾರು ಹಿಡಿದರೋ ಅವರು ರಕ್ಷೆ ಹೊಂದುವರು.!"* ಅದೇ ತರಹ ಯಾರು ಖಾಝಿಯ ಮಾತು ಸ್ವೀಕರಿಸಿದರೋ ಅವರು ವಿಜಯ ಹೊಂದುವರು. ಇನ್ನು ಯಾರು ಅವರನ್ನು ದಿಕ್ಕರಿಸಿ ಹೋದರೋ ಅವರಿಗೆ ನಾಶ ಕಂಡಿತಾ.! ಅಷ್ಟೇ ಅಲ್ಲ ಅಂತವರು ಇಸ್ಲಾಮಿನಿಂದ ಹೊರ ಹೋಗುವ